Tuesday, 19 November 2024

ನಿಜವಾದ ಸತ್ಯ ಮತ್ತು ಧರ್ಮದ ಮೇಲೆ ನಿಂತಿರುವ ಪವಿತ್ರ ನಾಡು ನಮ್ಮ ತುಳುನಾಡು....!!! ಇದು ಶ್ರೀ ಬೆಮ್ಮೆರೆ ಸತ್ಯ.

ನಿಜವಾದ ಸತ್ಯ ಮತ್ತು ಧರ್ಮದ ಮೇಲೆ ನಿಂತಿರುವ ಪವಿತ್ರ ನಾಡು ನಮ್ಮ ತುಳುನಾಡು....!!! ಇದು ಶ್ರೀ ಬೆಮ್ಮೆರೆ ಸತ್ಯ.

ಬರಹ: ಡಾ|| ಇಂದಿರಾ ಹೆಗ್ಡೆ

ತುಳುವರ ಸಭೆ ಸಮಾರಂಭಗಳಲ್ಲಿ ಕೈಗೆ ಮೈಕ್ ಸಿಕ್ಕ ಕೂಡಲೇ- ‘‘ನಮ್ಮದು ಪರಶುರಾಮ ಸೃಷ್ಟಿ’’ ಎಂದು ಹೇಳುತ್ತಲೇ ಭಾಷಣ ಶುರು ಮಾಡುವವರು ಹಲವರಿದ್ದಾರೆ. ಆದರೆ ಈ ಕಥೆಯನ್ನು ಅವರೆಂದೂ ವಿಶ್ಲೇಷಿಸಿರುವುದಿಲ್ಲ. ನಿಜವಾಗಿ ತುಳುನಾಡನ್ನು ಪರಶುರಾಮ ಸೃಷ್ಟಿಸಿದ್ದು ಎಂಬ ಪೌರಾಣಿಕ ಕಥೆಗೆ ಯಾವುದೇ ಐತಿಹಾಸಿಕ ಅಥವಾ ವೈಜ್ಞಾನಿಕ ಆಧಾರಗಳಿಲ್ಲ. ಕೇರಳದ ತ್ರಿವೇಂದ್ರಂನಿಂದ ಹಿಡಿದು ಗುಜರಾತ್‌ನ ಉಮರ್ಗಾಮ್‌ವರೆಗಿನ ನಮ್ಮ ಪಶ್ಚಿಮ ಕರಾವಳಿ ಸೃಷ್ಟಿಯಾಗಿದ್ದು, ಸುಮಾರು ನಾಲ್ಕರಿಂದ ಆರು ಕೋಟಿ ವರ್ಷಗಳ ಹಿಂದೆ, ಅದೂ ಆಫ್ರಿಕಾ ಖಂಡದಿಂದ ತುಂಡಾಗಿ ಸರಿದು ಬಂದ ಭೂಭಾಗವಿದು. ಕೇರಳದಿಂದ ಮಹಾರಾಷ್ಟ್ರ-ಗುಜರಾತ್ ಗಡಿಯವರೆಗೆ ಇರುವ ಸಹ್ಯಾದ್ರಿ ಪರ್ವತ ಶ್ರೇಣಿ ಹುಟ್ಟಿಕೊಂಡಿದ್ದೇ ಆಗ ನಡೆದ ಈ ಭೂಭಾಗಗಳ ಘರ್ಷಣೆಯಿಂದ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಇಂಟರ್ನೆಟ್ ಸರ್ಚ್‌ನಲ್ಲಿ-ಗೋಂಡ್ವಾನಾ ಲ್ಯಾಂಡ್ ಅಥವಾ ಕಾಂಟಿನೆಂಟಲ್ ಡ್ರಿಫ್ಟ್- ಎಂದು ಬರೆದು ಹುಡುಕಿದರೆ ಇದರ ಪೂರ್ಣ ಮಾಹಿತಿ ವಿಡಿಯೋದೊಂದಿಗೆ ಸಿಗುತ್ತದೆ. ಭೂ-ವಿಜ್ಞಾನಿಗಳಿಗೆ ನಮ್ಮ ಭಾರತದ ಪಶ್ಚಿಮ ಕರಾವಳಿಯಲ್ಲಿ ಸಿಕ್ಕಿರುವ ಜುರಾಸಿಕ್ ಯುಗದ ಸಸ್ಯಗಳ ಕಲ್ಲಾಗಿರುವ ಪಳೆಯುಳಿಕೆಯ ಆಧಾರದಲ್ಲಿ ಈ ಕರಾವಳಿಯ ಭೂಮಿ ನಾಲ್ಕು ಕೋಟಿ ವರ್ಷಗಳ ಹಿಂದೆಯೇ ಅಸ್ತಿತ್ವದಲ್ಲಿ ಇತ್ತು ಎಂಬುದನ್ನು ಸಾಬೀತು ಪಡಿಸುತ್ತದೆ. ಆಗ ಪರಶುರಾಮ ಎಂಬ ಮಾನವ ಬಿಡಿ ಯಾವುದೇ ವರ್ಗದ ಸಸ್ತನಿಗಳೂ ಇಲ್ಲಿರಲಿಲ್ಲ. ಆಗ ಇಲ್ಲಿದ್ದದ್ದು ಕೇವಲ ಮೊಟ್ಟೆಯಿಕ್ಕುವ ಜಾತಿಯ ಶೀತ ರಕ್ತದ ಡೈನೋಸಾರ್ ತರಹದ ಸರೀಸೃಪಗಳು ಮತ್ತು ಅಂತಹದ್ದೇ ಪಕ್ಷಿಗಳು ಮಾತ್ರ.

 ಕೇವಲ ಚರ್ಚೆಗಾಗಿ ನಾವು ಪುರಾಣ ಕಥೆಗಳು ಸತ್ಯ ಎಂದು ಒಂದು ಕ್ಷಣ ಒಪ್ಪಿದರೂ ಈ ಕೆಳಗಿನ ಜಿಜ್ನಾಸೆಗಳು ಹುಟ್ಟುತ್ತವೆ. ಬಲೀಂದ್ರ ತುಳುನಾಡಿನ ಅತ್ಯಂತ ಜನಾನುರಾಗಿ ಅರಸನಾಗಿದ್ದ ಎಂದು ನಮ್ಮ ಕರಾವಳಿಯ ಮೂಲನಿವಾಸಿಗಳ ನಂಬಿಕೆ. ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ತಳ್ಳಿದ ವಾಮನ ದೇವರು ವಿಷ್ಣುವಿನ ಐದನೆಯ ಅವತಾರ. ಆದರೆ ಪರಶುರಾಮನು ವಿಷ್ಣುವಿನ ಆರನೆಯ ಅವತಾರ. ಇದರ ಅರ್ಥ ವಾಮನ ಅವತಾರದ ಸಾವಿರಾರು ವರ್ಷಗಳ ನಂತರ ಪರಶುರಾಮ ಅವತಾರ ಹುಟ್ಟಿದ್ದು. ಅಂದರೆ ಪರಶುರಾಮನಿಗಿಂತ ಮೊದಲೇ ಬಲಿ ಚಕ್ರವರ್ತಿ ಆಳುತ್ತಿದ್ದ ಪಶ್ಚಿಮ ಕರಾವಳಿ ಅಸ್ತಿತ್ವದಲ್ಲಿ ಇತ್ತೆಂದು ಪುರಾಣಕರ್ತರೇ ಒಪ್ಪಿಕೊಂಡಂತಾಯಿತು. ಹಾಗಾದರೆ ಪರಶುರಾಮನಿಗಿಂತ ಸಾವಿರಾರು ವರ್ಷಗಳ ಮೊದಲೇ ವಾಮನ ದೇವರು ಹೆಜ್ಜೆಯಿಟ್ಟಿದ್ದ ತುಳುನಾಡನ್ನು ಮುಂದಿನ ಅವತಾರದಲ್ಲಿ ಪರಶುರಾಮನು ಪುನಃ ಸೃಷ್ಟಿಸುವುದು ಹೇಗೆ ಸಾಧ್ಯ? ಈ ರೀತಿ ನಮ್ಮ ಪಶ್ಚಿಮ ಕರಾವಳಿಯನ್ನು ಪರಶುರಾಮನೇ ಸೃಷ್ಟಿಸಿದ್ದು ಎಂಬ ಕಥೆ ತಾರ್ಕಿಕವಾಗಿ ತಪ್ಪುಎಂದು ವಿಷ್ಣು ಪುರಾಣ ಬರೆದವರೇ ರುಜುವಾತು ಮಾಡಿದಂತೆ ಆಯಿತಲ್ಲವೇ!
    
    ಪುರಾಣದ ಆಧಾರದಲ್ಲಿಯೇ ಹೇಳುವುದಾ ದರೆ ಶುದ್ಧ ಜಾತಿವಾದಿ ಭಾರ್ಗವ ಪರಶು ರಾಮನು ಒಬ್ಬನೇ ಒಬ್ಬ ಕ್ಷತ್ರಿಯನಿಗೆ ಸಹಾಯ ಮಾಡಿಲ್ಲ. ತನ್ನ ಪ್ರಿಯ ಶಿಷ್ಯನಾದ ಕರ್ಣನು ಬ್ರಾಹ್ಮಣನಲ್ಲ ಅವನು ಕ್ಷತ್ರಿಯನು ಎಂದು ಗೊತ್ತಾದ ತಕ್ಷಣ ಅವನಿಗೂ ಪರಶು ರಾಮನು ತಾನೇ ಕಲಿಸಿದ ಸಮರ ಕಲೆ ಯುದ್ಧ ಭೂಮಿಯಲ್ಲೇ ಮರೆತು ಹೋಗಲಿ ಎಂಬ ಘೋರ ಶಾಪ ಕೊಟ್ಟು ಕುರುಕ್ಷೇತ್ರ ಯುದ್ಧದಲ್ಲಿ ವೀರ ಕರ್ಣನ ದುರ್ಮರಣಕ್ಕೆ ಪರೋಕ್ಷ ಕಾರಣವಾಗಿದ್ದನು. ಅದಕ್ಕೆ ಮೊದಲು ಪರಶುರಾಮನು ಭೀಷ್ಮನೊಂದಿಗೆ ಯುದ್ಧ ಮಾಡಿ ಸೋತು ಜಮದಗ್ನಿಯ ಮಧ್ಯಸ್ಥಿಕೆಯಿಂದಾಗಿ ಭೀಷ್ಮನಿಂದ ಜೀವದಾನ ಪಡೆದಿದ್ದನು. ರಾಮಾಯಣ ಕಾಲದಲ್ಲಿ ಶ್ರೀರಾಮನಿಂದ ಸೋತು ಈ ಭಾರ್ಗವ ಜೀವ ಭಿಕ್ಷೆ ಬೇಡಿದ್ದ. ಬಾಲಗಣೇಶನೊಂದಿಗೆ ದುರಹಂಕಾರದಿಂದ ಜಗಳವಾಡಿ ಪಾರ್ವತಿಯಿಂದ ಈತ ಶಪಿತನಾಗಿದ್ದನು. ಅಕ್ಕ-ತಂಗಿಯರಿಗೆ ಹುಟ್ಟಿದ ಬಂಟ, ಬಿಲ್ಲವ ಮತ್ತು ಮೊಗವೀರರು ಒಂದೇ ಮೂಲದ ಕ್ಷತ್ರಿಯರು ಎನ್ನುತ್ತವೆ ತುಳುನಾಡಿನ ಜಾನಪದ ಕಥೆಗಳು. ಈ ಮೂರು ಜಾತಿಗಳು ಕೂಡಿ ಇಲ್ಲಿಯ 60% ಜನಸಂಖ್ಯೆ ಆಗುತ್ತದೆ. ಬದ್ಧ ಕ್ಷತ್ರಿಯದ್ವೇಷಿ ಪರಶುರಾಮ ತಾನೇ ಸೃಷ್ಟಿಸಿದ ನೆಲದಲ್ಲಿ ಒಟ್ಟು ಜನಸಂಖ್ಯೆಯ 60%ರಷ್ಟು ಕ್ಷತ್ರಿಯ ಜನಾಂಗದವರನ್ನು ಸ್ವತಃ ತಾನೇ ತಂದು ನೆಲೆಗೊಳಿಸಿದ ಎಂಬ ಕಥೆಯೇ ವಿರೋಧಾಭಾಸದಿಂದ ಕೂಡಿದ್ದು. ಆದರೂ ವೈದಿಕರು ಕಟ್ಟಿದ ‘ಪರಶುರಾಮ ಸೃಷ್ಟಿ’ ಎಂಬ ಕಾಲ್ಪನಿಕ ಕಥೆಗೆ ಶೂದ್ರರು ನೀರು ಗೊಬ್ಬರ ಹಾಕಿ ವಿಚಾರಹೀನರಂತೆ ಪೋಷಿಸುತ್ತಿದ್ದಾರೆ ಅಷ್ಟೇ. ತುಳುನಾಡಿನ ಇತಿಹಾಸದ ಸಂಶೋಧಕರಲ್ಲಿ ಅತೀ ಹೆಚ್ಚು ಮಾನ್ಯತೆ ಪಡೆದಿರುವ ಡಾ. ಪಿ. ಗುರುರಾಜ ಭಟ್ ಇವರೂ ಪರಶುರಾಮನ ಕಥೆಗೂ ತುಳುನಾಡಿನ ಇತಿಹಾಸಕ್ಕೂ ಸಂಬಂಧವೇ ಇಲ್ಲ ಎಂದಿದ್ದಾರೆ. ಇದು ಕೇವಲ ದಕ್ಷಿಣ ಕೇರಳದಲ್ಲಿ ಒಂದು ಜಾನಪದ ಕಥೆಯಾಗಿ ಮೊದಲು ಪ್ರಚಲಿತವಿತ್ತು. ಕೇರಳೋತ್ಪತ್ತಿ ಎಂಬ ಹದಿನಾರನೆ ಶತಮಾನದ ಒಂದು ಗ್ರಂಥ ಹೊರತು ಪಡಿಸಿ ಬೇರೆಲ್ಲಿಯೂ ಇದರ ಉಲ್ಲೇಖವಿಲ್ಲವಂತೆ. ನಮ್ಮ ತುಳುನಾಡಿನ ಅಥವಾ ಮಹಾರಾಷ್ಟ್ರದ ಯಾವುದೇ ಪ್ರಾಚೀನ ಗ್ರಂಥಗಳಲ್ಲಿ ಈ ಕತೆಯ ಉಲ್ಲೇಖವೇ ಇಲ್ಲ. 

ಇನ್ನೂರು ವರ್ಷಗಳ ಹಿಂದೆ ‘ಸತ್ಯನಾರಾಯಣ ವ್ರತ’ ಎಂಬ ಕಾಲ್ಪನಿಕ ಕಥೆಯು ಉತ್ತರ ಭಾರತದ ವೈಶ್ಯ ವ್ಯಾಪಾರಿಗಳ ಮನೆಯಲ್ಲಿ ಹುಟ್ಟಿ ನಂತರ ದೇಶವಿಡೀ ಪಸರಿಸಿದಂತೆ ‘ಪರಶುರಾಮ ಸೃಷ್ಟಿ’ ಎಂಬ ಕಾಲ್ಪನಿಕ ಕಥೆಯೂ ಇನ್ನೂರು ವರ್ಷಗಳ ಹಿಂದೆ ಕೇರಳಕ್ಕೆ ಹೋಗಿ ಬಂದಿದ್ದ ಕರಾವಳಿಯ ಬ್ರಾಹ್ಮಣ ತಂತ್ರಿಗಳ ಮೂಲಕ ತುಳುನಾಡಲ್ಲಿ ಪಸರಿಸಿತಂತೆ. ತುಳುನಾಡಿನ ಯಾವುದೇ ಪುರಾತನ ಇತಿಹಾಸ, ಭೂತಾಳ ಪಾಂಡ್ಯನ ಜಾನಪದ ಕಥೆ, ಅಥವಾ ತುಳು ಪಾಡ್ಢನಗಳಲ್ಲಿ ಪರಶುರಾಮ ಸೃಷ್ಟಿಯ ಕಥೆಯ ಉಲ್ಲೇಖವಿಲ್ಲ. ದ್ವಾಪರ ಯುಗದಲ್ಲಿ ಇಷ್ಟು ವಿಸ್ತಾರವಾದ ಕರಾವಳಿಯ ಭೂಮಿಯನ್ನು ಪರಶುರಾಮನು ಕೇವಲ ಕಶ್ಯಪ ಗೋತ್ರದ ಬ್ರಾಹ್ಮಣರಿಗೆ ಮಾತ್ರವೇ ದಾನ ಕೊಟ್ಟಿದ್ದನು ಎಂಬುದು ಆ ಕತೆಯಲ್ಲಿದೆ. ಆದರೆ ವಾಸ್ತವ ವಾಗಿ ಇಷ್ಟು ವಿಸ್ತಾರವಾದ ಭೂಮಿ ದಾನ ಪಡೆಯಲು ಆಗ ಇಲ್ಲಿ ಯಾವುದೇ ಗೋತ್ರದ ಬ್ರಾಹ್ಮಣ ಜನಾಂಗವೇ ಇರಲಿಲ್ಲವಲ್ಲ! 

ಬ್ರಾಹ್ಮಣರು ತುಳುನಾಡಿಗೆ ಬಂದಿದ್ದೇ ಕೇವಲ 1,600 ವರ್ಷಗಳ ಹಿಂದೆ ಕದಂಬರ ಕಾಲದಲ್ಲಿ. ನಮ್ಮ ಕರಾವಳಿಯು ಪರಶುರಾಮನು ಸೃಷ್ಟಿಸಿದ ಭೂಮಿಯೆಂದು ಸ್ಕಂದ ಪುರಾಣದಲ್ಲಿ ಬರೆದಿದ್ದು ನಿಜವೇ ಆಗಿದ್ದರೆ ಮಧ್ವಾಚಾರ್ಯ ಮತ್ತು ವಾದಿರಾಜರು ತಮ್ಮ ಆರಾಧ್ಯ ದೈವ ವಿಷ್ಣುವಿನ ಆರನೆಯ ಅವತಾರದ ಈ ಘನ ಕಾರ್ಯವನ್ನು ತಮ್ಮ ಯಾವುದಾದರೂ ಗ್ರಂಥದಲ್ಲಿ ಒಮ್ಮೆಯಾದರೂ ಉಲ್ಲೇಖಿಸದೇ ಇರುತ್ತಿರಲಿಲ್ಲ. ಸ್ಕಂದ ಪುರಾಣದಲ್ಲಿ ‘ಸಹ್ಯಾದ್ರಿ ಖಂಡ’ ಎಂಬ ಬಾಲಂಗೋಚಿಯನ್ನು ನಂತರ ಯಾರೋ ಸೇರಿಸಿದ್ದು ಹಾಗೂ ಅದು ಮೂಲ ಸ್ಕಂದ ಪುರಾಣದಲ್ಲಿ ಇಲ್ಲವೇ ಇಲ್ಲ ಎಂದು ಕಾಶಿಯ ಧರ್ಮ ಸಂಸದಿನ ಪಂಡಿತರು ಎಂದೋ ಘೋಷಿಸಿದ್ದಾರೆ ಎಂದು ಕುಕ್ಕೆ ಹಾಗೂ ಉಡುಪಿ ದೇವಳಗಳ ಇತಿಹಾಸ ಸಂಶೋಧಕ ಡಾ. ಅಚ್ಚುತ ಶರ್ಮ ಇವರ ಅಭಿಪ್ರಾಯ. ಆದರೆ ಇದೇಕೋ ನಮ್ಮ ತುಳುನಾಡಿನ ಪಂಡಿತರಿಗೆ ಅರ್ಥವಾಗುತ್ತಿಲ್ಲ! ನೂರಾರು ವರ್ಷ ತುಳುನಾಡನ್ನು ಆಳಿದ ಅಳುಪ ರಾಜರು ಎಲ್ಲ ಶೈವ ವೈಷ್ಣವ ಶಾಕ್ತ ದೇವರ ದೇವಸ್ಥಾನಗಳನ್ನು ಕಟ್ಟಿಸಿದ್ದಾರೆ, ಆದರೆ ಒಂದೇ ಒಂದು ಪರಶುರಾಮ ದೇವಸ್ಥಾನ ಯಾಕೆ ಕಟ್ಟಿಸಲಿಲ್ಲ? ರಾಮ-ಸೀತೆ-ಲಕ್ಷ್ಮಣ ಹಾಗೂ ದ್ರೌಪದಿ- ಕೃಷ್ಣ-ಪಾಂಡವರು ಅಡುಗೆ, ಸ್ನಾನ, ತಪಸ್ಸು ಅಥವಾ ಬೇರೇನೋ ಮಾಡಿದ ಸ್ಥಳವೆಲ್ಲ ಪವಿತ್ರ ಕ್ಷೇತ್ರಗಳಾಗಿ ಮಾರ್ಪಟ್ಟಿವೆ. ಆದರೆ ಯಾವ ಸ್ಥಳದಲ್ಲಿ ಪರಶುರಾಮ ತಪಸ್ಸು ಮಾಡಿ ಸಮುದ್ರಕ್ಕೆ ಕೊಡಲಿ ಬೀಸಿದ್ದನೋ ಆ ಸ್ಥಳ ಪವಿತ್ರ ಕ್ಷೇತ್ರ ಯಾಕಾಗಲಿಲ್ಲ? ಸಹ್ಯಾದ್ರಿ ಪರ್ವತವಿರುವುದು ಕೇವಲ ತುಳುನಾಡಿನಲ್ಲಿ ಮಾತ್ರವಲ್ಲ, ಅದು ಕೇರಳದ ತ್ರಿವೇಂದ್ರಮ್‌ನಿಂದ ದಕ್ಷಿಣ ಗುಜರಾತ್‌ನ ವರೆಗೆ ಹರಡಿದೆ. ಹಾಗಿರುವಾಗ ಪರಶುರಾಮ ಸೃಷ್ಟಿ ಸಹಾ ಪಶ್ಚಿಮ ಕರಾವಳಿಯ ಈ ಐದೂ ರಾಜ್ಯಗಳಲ್ಲಿ ಹರಡಿದೆ ತಾನೆ?. ಯಾಕೆಂದರೆ ಸಮಸ್ತ ಪಶ್ಚಿಮ ಕರಾವಳಿ ಹಾಗೂ ಸಹ್ಯಾದ್ರಿ ಪರ್ವತ ಒಂದೇ ಸಮಯಕ್ಕೆ ಉಂಟಾಗಿದ್ದು. ಹಾಗಿದ್ದರೂ ಗೋವಾ, ಮಹಾರಾಷ್ಟ್ರ ದಕ್ಷಿಣ-ಗುಜರಾತ್‌ನವರು ಈ ಕಥೆ ನಂಬುತ್ತಲೇ ಇಲ್ಲ. ಅಲ್ಲಿಯವರು ನಾಗದೇವರ ಹೆಸರಲ್ಲಿ 30-40 ಲಕ್ಷ ಖರ್ಚು ಮಾಡಿ ನಾಗಮಂಡಲ ಮಾಡುವುದೇ ಇಲ್ಲ. ಹಾಗಾದರೆ ಅವರನ್ನೆಲ್ಲ ಪರಶುರಾಮ ಘೋರ ನರಕಕ್ಕೆ ಕಳುಹಿಸುತ್ತಾನೆಯೇ? ನಾಗ ದೇವರನ್ನು ತುಳುವರೆಲ್ಲ ಪೂಜಿಸ ಬೇಕೆಂದು ಪರಶುರಾಮನೇ ಹೇಳಿದ್ದು ಎಂಬುದು ಸರಿಯಲ್ಲ. ಆರ್ಯ ಪುರಾಣಗಳ ಪ್ರಕಾರ ಪರಶುರಾಮನಿದ್ದದ್ದು ಮೂರು ಸಾವಿರ ವಗಳ ಹಿಂದೆ. ಆದರೆ ದ್ರಾವಿಡ ತುಳುವರು ಅದಕ್ಕಿಂತ ಮುಂಚಿನಿಂದಲೂ ನಾಗಪೂಜೆ ಮಾಡುತ್ತಿದ್ದ್ದುದ್ದು ತುಳುನಾಡಿನ ಇತಿಹಾಸದಿಂದ ತಿಳಿದುಬರುತ್ತದೆ. 

ಮೇಲಾಗಿ ಸಮುದ್ರದ ಉಪ್ಪುನೀರಿನಲ್ಲಿ ನಾಗಜಾತಿಯ ಸರ್ಪಗಳೇ ವಾಸಿಸುವುದಿಲ್ಲ. ಹಾಗಿರುವಾಗ ಪರಶುರಾಮ ನಮ್ಮ ಭೂಮಿಯನ್ನು ಸಮುದ್ರದಿಂದ ಮೇಲೆತ್ತಿದಾಗ ಇಲ್ಲೆಲ್ಲ ನಾಗರಹಾವುಗಳೇ ತುಂಬಿಕೊಂಡಿದ್ದವು ಎನ್ನುವುದನ್ನು ಉರಗತಜ್ಞರು ಒಪ್ಪುವುದಿಲ್ಲ. ಹಾಗಾಗಿ ನಾಗಪೂಜೆಗೂ ಪರಶುರಾಮನಿಗೂ ನಂಟು ಕಲ್ಪಿಸುವುದು ತಪ್ಪು. ಪುರಾಣದ ಹೂರಣ ಹೊರ ತೆಗೆದ ಸಂಶೋಧಕರ ಪ್ರಕಾರ ಸಹ್ಯಾದ್ರಿ ಪರ್ವತಕ್ಕೆ ಹೊಂದಿಕೊಂಡಿರುವ ಕರಾವಳಿಯೂ ದಟ್ಟ ಅರಣ್ಯದಿಂದ ತುಂಬಿತ್ತು. ಆದರೆ ಉತ್ತರದಿಂದ ಬಂದ ಆರ್ಯನ್ನರು ಕೊಡಲಿಯಿಂದ ಮರ ಕಡಿದು ಅರಣ್ಯ ನಾಶ ಮಾಡಿದ್ದರ ಸಂಕೇತವೇ ಕೊಡಲಿ ಹಿಡಿದ ಭಾರ್ಗವರಾಮ. ಅರಣ್ಯ ನಾಶವನ್ನು ವಿರೋಧಿಸಿದ ಪ್ರಕೃತಿ ಪ್ರೇಮಿ ಬುಡಕಟ್ಟು ಜನರನ್ನು ಆರ್ಯನ್ನರು ಕೊಂದು ಹಾಕಿದ್ದರ ಸಂಕೇತವೇ ಪರಾಶುರಾಮನಿಂದ ಕ್ಷತ್ರಿಯ ಸಂಹಾರ. ಅಂದರೆ ದುಷ್ಟ ಆರ್ಯನ್ನರ ಆಕ್ರಮಣ ಹಾಗೂ ದ್ರಾವಿಡ ಆದಿವಾಸಿಗಳ ಭೂಮಿಯನ್ನು ಬಲಾತ್ಕಾರದಿಂದ ಕಸಿದುಕೊಂಡದ್ದನ್ನು ಸಂಕೇತಿಸುವ ಕಥೆಯೇ ಪರಶುರಾಮ ಸೃಷ್ಟಿಯ ಕಥೆ. ಅರಣ್ಯನಾಶದಿಂದ ನೆಲೆ ಕಳೆದುಕೊಂಡ ನಾಗರ ಹಾವುಗಳು ಅನಿವಾರ್ಯವಾಗಿ ಊರೊಳಗೆ ಬಂದು ಜನರನ್ನು ಕಚ್ಚುತ್ತಿದ್ದುದರಿಂದ ಆ ನಾಗರಹಾವುಗಳನ್ನು ಆರ್ಯ ಆಕ್ರಮಣಕಾರರು ನಿರ್ದಯವಾಗಿ ಕೊಂದಿದ್ದನ್ನು ಪ್ರಕೃತಿ ಪ್ರೇಮಿ ಆದಿವಾಸಿಗಳು ವಿರೋಧಿಸಿದಾಗ ಅವರನ್ನು ಸಮಾಧಾನಗೊಳಿಸಲು ನಾಗನ ಪ್ರತಿಮೆ ಮಾಡಿಕೊಟ್ಟು ಸಣ್ಣ ಸಣ್ಣ ವನ (ಬನ) ದಲ್ಲಿ ಇವನ್ನಿಟ್ಟು ಪೂಜಿಸಿದರೆ ನಾಗಗಳು ತೃಪ್ತಿ ಹೊಂದುತ್ತವೆ ಎಂದು ಆರ್ಯರು ಬ್ರೈನ್ ವಾಷ್ ಮಾಡಿದರು. ಹಾಗಾಗಿ ಕೇವಲ ಶೂದ್ರ ಜಾತಿಯ ತುಳುವರಿಗೆ ಮಾತ್ರ ನಾಗಮೂಲ ಇರುವುದು. ತುಳು ಬ್ರಾಹ್ಮಣರಿಗೆ ನಾಗಮೂಲ ಇಲ್ಲ! 

ಹಾಗೆಯೇ ಅರಣ್ಯ ನಾಶದಿಂದ ನೆಲೆ ಕಳೆದುಕೊಂಡ ವನ್ಯಪ್ರಾಣಿಗಳಾದ ಕಾಡುಹಂದಿ, ಹುಲಿ, ಕಾಡೆಮ್ಮೆಗಳು ನಾಡಿಗೆ ಬಂದು ಉಪಟಳ ಕೊಡುತ್ತಿದ್ದುದರಿಂದ ಅವುಗಳ ಉಪಶಮನಕ್ಕೆ ಪಂಜುರ್ಲಿ, ಪಿಲಿಚಂಡಿ, ಮೈಸಂದಾಯ ಈ ಭೂತಗಳ ಸ್ವರೂಪದಲ್ಲಿ ಆದಿವಾಸಿಗಳು ಪ್ರಾಣಿಪೂಜೆ ಶುರುಮಾಡಿರಬೇಕು.
ಯಾವುದೇ ಆಯುಧ, ಶಸಾಸ್ತ್ರಗಳಿಲ್ಲದೇ, ಸ್ವಲ್ಪವೂ ರಕ್ತಪಾತವಿಲ್ಲದೇ, ಕೇವಲ ಕಾಲ್ಪನಿಕ ಪುರಾಣ ಕಥೆಗಳ ಬಲದಿಂದ ಶಬ್ದಗಳ ಜಾಲ ಹೆಣೆದು ವೈದಿಕರು ಇಡೀ ಹಿಂದೂ ಸಮಾಜವನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿರುವುದು ನಿಜ ಎಂಬುದಕ್ಕೆ ನಮ್ಮ ತುಳುನಾಡಿನ ಶೂದ್ರರು ಈಗಲೂ ಹೆಮ್ಮೆಯಿಂದ ಮೆಲ್ಲುತ್ತಿರುವ ವೈದಿಕರ ಉಚ್ಛಿಷ್ಟವಾದ ಪರಶುರಾಮ ಸೃಷ್ಟಿಯ ಕಥೆಯೇ ಸ್ಪಷ್ಟ ನಿದರ್ಶನ.

: ಡಾ|| ಇಂದಿರಾ ಹೆಗ್ಡೆ

Monday, 24 January 2022

ಹಳದಿ ಶಾಲು, ಧ್ವಜಕ್ಕೆ ಮಾತ್ರ ಅವಕಾಶ'ಜ. 26ರಂದು ಬಿಲ್ಲವ ಸಂಘಟನೆಗಳಿಂದ ‘ಗುರುವಿನ ಕಡೆಗೆ ಸ್ವಾಭಿಮಾನದ ನಡಿಗೆ’

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಹಳದಿ ಶಾಲು, ಧ್ವಜಕ್ಕೆ ಮಾತ್ರ ಅವಕಾಶ'
ಜ. 26ರಂದು ಬಿಲ್ಲವ ಸಂಘಟನೆಗಳಿಂದ ‘ಗುರುವಿನ ಕಡೆಗೆ ಸ್ವಾಭಿಮಾನದ ನಡಿಗೆ.ಮಂಗಳೂರು, ಜ. 24: ಗಣರಾಜ್ಯೋತ್ಸವ ಪರೇಡ್‌ಗೆ ಕೇರಳ ಸರಕಾರ ಕಳುಹಿಸಿದ್ದ ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ಧಚಿತ್ರ ನಿರಾಕರಣೆ ಖಂಡಿಸಿ ಜ.26ರಂದು ಸಮಸ್ತ ಅವಿಭಜಿತ ದ.ಕ. ಜಿಲ್ಲೆಯ ಬಿಲ್ಲವ ಸಂಘಗಳು, ಸಂಘಟನೆಗಳು ಹಾಗೂ ಬಿಲ್ಲವ ಸಮಾಜದ ವತಿಯಿಂದ ‘ಗುರಿ ತೋರಿದ ಗುರುವಿನ ಕಡೆಗೆ ಸ್ವಾಭಿಮಾನದ ಜಾಥಾ’ವನ್ನು ಆಯೋಜಿಸಲಾಗಿದೆ ಎಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ತಿಳಿಸಿದ್ದಾರೆ.

ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಇಂದು ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ನೇತೃತ್ವದಲ್ಲಿ ಜಾಥಾ ನಡೆಯಲಿದ್ದು, ಈ ಜಾಥಾದಲ್ಲಿ ಘೋಷಣೆಗಳಿರುವುದಿಲ್ಲ. ಯಾರ ವಿರುದ್ಧವೂ ಧಿಕ್ಕಾರ ಕೂಗಲು ಅವಕಾಶವಿಲ್ಲ. ಭಾಗವಹಿಸುವ ವಾಹನಗಳು ನಾರಾಯಣಗುರುಗಳು ಶಾಂತಿಯ ಸಂಕೇತವಾಗಿ ನೀಡಿರುವ ಹಳದಿ ಪತಾಕೆಯನ್ನು ಹಾಗೂ ಭಾಗವಹಿಸುವ ನಾರಾಯಣ ಗುರುಗಳ ಅನುಯಾಯಿಗಳು ಹಳದಿ ಶಾಲು ಮಾತ್ರ ಧರಿಸಲು ಅವಕಾಶವಿರುತ್ತದೆ ಎಂದರು.

ಕೇಂದ್ರ ಸರಕಾರದ ಸುತ್ತೋಲೆ ಪ್ರಕಾರ ಕೇರಳ ರಾಜ್ಯ ಸರಕಾರ ಕಳುಹಿಸಿದ್ದ ಸ್ತಬ್ಧಚಿತ್ರಗಳಲ್ಲಿ ಆಯ್ಕೆ ಸಮಿತಿಯು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿ ನಾರಾಯಣಗುರುಗಳ ಪ್ರತಿಮೆಯಿದ್ದ ಸ್ತಬ್ಧಚಿತ್ರಕ್ಕೆ ಮೆಚ್ಚುಗೆ ಸೂಚಿಸಿತ್ತು. ಆದರೆ, ನಾರಾಯಣಗುರುಗಳ ಪ್ರತಿಮೆ ತೆಗೆದು, ಶಂಕರಾರಾರ್ಯ ಬದಲಾವಣೆಗೆ ಸೂಚನೆ ನೀಡಿರುವುದು ನಾರಾಯಣಗುರುಗಳ ಅನುಯಾಯಿಗಳಿಗೆ ಆಗಿರುವ ನೋವು. ಆಯ್ಕೆ ಸಮಿತಿ ನೇರವಾಗಿ ನಿರಾಕರಿಸಿದ್ದರೆ ನಾವು ಮಾತನಾಡುತ್ತಿರಲಿಲ್ಲ. ಗಣರಾಜ್ಯೋತ್ಸವ ಪೆರೇಡ್ ದೇಶದ ಹೆಮ್ಮೆ. ಸ್ತಬ್ಧ ಚಿತ್ರಗಳನ್ನು ಆಯ್ಕೆ ಮಾಡಲು ಅದರದ್ದೇ ಆದ ಮಾನದಂಡಗಳಿವೆ. ಆದರೆ ಸ್ತಬ್ಧ ಚಿತ್ರದ ಪರಿಕಲ್ಪನೆ ಎಲ್ಲವೂ ಉತ್ತಮವಾಗಿದೆ ಎಂದು ಹೇಳಿ ಅಲ್ಲಿ ನಾರಾಯಣಗುರುಗಳ ಪ್ರತಿಮೆ ಬದಲಿಗೆ ಶಂಕರಾಚಾರ್ಯರ ಪ್ರತಿಮೆ ಹಾಕುವಂತೆ ಹೇಳಿದ್ದು, ಅವರ ಅನುಯಾಯಿಗಳಾದ ನಮಗೆ ನೋವಾಗಿದೆ. ಇದನ್ನು ಸರಿಪಡಿಸುವಂತೆ ಹೇಳಿದಾಗ ಇದನ್ನು ಸಮರ್ಥನೆ ಮಾಡುವಂತಹ ಪ್ರಯತ್ನ ನಡೆದಿದೆ. ಈ ಬಗ್ಗೆ ಕುದ್ರೋಳಿ ಕ್ಷೇತ್ರದ ನವೀಕರಣದ ರುವಾರಿ ಜನಾರ್ದನ ಪೂಜಾರಿಯವರು ಕೂಡಾ ತಮ್ಮ ನೋವನ್ನು ತೋಡಿಕೊಂಡು ಇದರ ವಿರುದ್ಧ ಧ್ವನಿ ಎತ್ತುವುದು ಅಗತ್ಯವೆಂದು ಹೇಳಿದ್ದಾರೆ.

ಆ ನಿಟ್ಟಿನಲ್ಲಿ ಜಾಥಾ ನಡೆಸಲಾಗುತ್ತಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳು ಮಾಡಿರುವ ಕ್ರಾಂತಿ, ಶಾಂತಿಯುತ ಸಂಘರ್ಷ ರಹಿತ ಕ್ರಾಂತಿಗಳು. ಆ ಪ್ರಕಾರ ಜ. 26ರಂದು ಕರಾವಳಿ ಜಿಲ್ಲೆಗಳಲ್ಲಿ ನಾರಾಯಣಗುರು ಸ್ವಾಭಿಮಾನ ಜಾಥಾ ನಡಿಗೆ ಹಮ್ಮಿಕೊಲ್ಳಲಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ ನಾರಾಯಣಗುರುಗಳ ಟ್ಯಾಬ್ಲೋ ಹಾಗೂ ಭಜನಾ ತಂಡಗಳು ಆಯ್ದ ಸ್ಥಳಗಳಲ್ಲಿ ಸಂಚರಿಸಿ ಸಂಜೆ 6 ಗಂಟೆಗೆ ಗೋಕರ್ಣನಾಥ ಕ್ಷೇತ್ರ ತಲುಪಲಿವೆ. ಮಂಗಳೂರಿನಿಂದ ಬಿಲ್ಲವ ಸಮುದಾಯದ ವತಿಯಿಂದ ಹೊರಡುವ ಸ್ತಬ್ಧಚಿತ್ರ ಅಂದು ಮಧ್ಯಾಹ್ನ 3 ಗಂಟೆಗೆ ಗರೋಡಿ ಕ್ಷೇತ್ರದಿಂದ ಹೊರಟು ಪಂಪವೆಲ್ ಸರ್ಕಲ್, ಕರಾವಳಿ ಜಂಕ್ಷನ್, ಅಂಬೇಡ್ಕರ್ ವೃತ್ತ ಹಾಗೂ ಹಂಪನ್‌ಕಟ್ಟ ಸಿಗ್ನಲ್‌ನಿಂದ ಕೆ.ಎಸ್.ರಾವ್ ರೋಡ್, ನವಭಾರತ್ ಸರ್ಕಲ್, ಪಿವಿಎಸ್‌ ಜಂಕ್ಷನ್, ಎಂಜಿ.ರಸ್ತೆ, ಲಾಲ್‌ಬಾಗ್, ಲೇಡಿಹಿಲ್ ಸರ್ಕಲ್ ಆಗಿ ಕ್ಷೇತ್ರಕ್ಕೆ ತಲುಪಲಿದೆ. ಬೈಂದೂರು, ಕಾರ್ಕಳ, ಉಡುಪಿ, ಮುಲ್ಕಿ, ಪುತ್ತೂರು, ಬಂಟ್ವಾಳದಿಂದ ಸಮಯ ಹೊಂದಾಣಿಕೆ ಮಾಡಿಕೊಂಡು ಒಟ್ಟು ಸೇರಿಕೊಂಡು ಕ್ಷೇತ್ರಕ್ಕೆ ತಲುಪಲಿದೆ ಎಂದು ಪದ್ಮರಾಜ್ ವಿವರಿಸಿದರು.

ನಾರಾಯಣ ಗುರು ಒಂದೇ ಮತ, ಒಂದೇ ದೇವರು ಎಂಬ ಅದ್ಭುತ ಸಂದೇಶ ನೀಡಿದವರು. ಈ ಸಮಾಜದಲ್ಲಿ ಈಗಲೂ ಅಸಮಾನತೆ ಇದೆ ಎಂಬುದು ಮೇಲ್ನೋಟಕ್ಕೆ ಎಲ್ಲರಿಗೂ ಗೊತ್ತಿದೆ, ಆಗುತ್ತಲೇ ಇದೆ. ಹಿಂದುಳಿದವರನ್ನು ತುಳಿಯುವರನ್ನು ಕೆಲಸ ಈಗಲೂ ನಡೆಯುತ್ತಿದೆ. ನಾರಾಯಣಗುರುಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಗೋಕರ್ಣನಾಥ ಕ್ಷೇತ್ರದಲ್ಲಿ ನಾರಾಯಣಗುರುಗಳ ತತ್ವ, ಸಂದೇಶವನ್ನು ಅಕ್ಷರಶ: ಪಾಲಿಸುವ ಕಾರ್ಯ ಆಗುತ್ತಿದೆ. ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿಯವರು ಇಲ್ಲಿ ನಾರಾಯಣಗುರುಗಳ ತತ್ವ ಸಂದೇಶವನ್ನು ಪಾಲಿಸುವ ನಿಟ್ಟಿನಲ್ಲಿ ಹಗಲಿರುಳು ದುಡಿದವರು. ಇಲ್ಲಿ ಹಿಂದುಳಿದ ವರ್ಗದ ಅರ್ಚಕರೇ ಇರುವಂತದ್ದು. ಪರಿಶಿಷ್ಟ ಜಾತಿಯ ಅರ್ಚಕರನ್ನು ನೇಮಕ ಮಾಡಲಾಗಿತ್ತು, ಮಹಿಳೆಯ ಪಾದಪೂಜೆಯನ್ನೂ ಇಲ್ಲಿ ಮಾಡಲಾಗಿತ್ತು. ಮುಂದಿನ ಜನಾಂಗಕಕ್ಕೂ ನಾರಾಯಣಗುರುಗಳ ತತ್ವ ಸಂದೇಶವನ್ನು ಲೋಕಾದ್ಯಂತ ಪ್ರಚಾರ ಆಗಬೇಕು ಎಂಬುದು ನಮ್ಮ ಆಶಯ ಎಂದವರು ಹೇಳಿದರು.

ಈ ಜಾಥಾದಲ್ಲಿ ಯಾವುದೇ ರೀತಿಯ ಘೋಷಣೆ ರಹಿತವಾಗಿ ಮೌನವಾಗಿ ನಡೆಯಲಿದೆ. ಕೇವಲ ಹಳದಿ ಧ್ವಜ, ಶಾಲು ಮಾತ್ರ ಅವಕಾಶ. ಬೇರೆ ಯಾವುದೇ ಬಣ್ಣದ ಧ್ವಜ, ಶಾಲಿಗೆ ಇಲ್ಲಿ ಅವಕಾಶವಿಲ್ಲ. ಗುರುಗಳ ತತ್ವದ ಪ್ರಕಾರ ಎಲ್ಲಾ ಜಾತಿ, ಮತ, ಧರ್ಮ, ಪಕ್ಷ, ಪಂಥದ ಜಾಥಾ ಇದಾಗಲಿದೆ. ಕೇವಲ ಹಿಂದುಳಿದ ವರ್ಗ ಮಾತ್ರವಲ್ಲ ಎಲ್ಲಾ ಜಾತಿ, ಧರ್ಮಗಳವರು ಈ ಜಾಥಾದಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಲ್ಲವ ಮುಖಂಡರಾದ ಸತ್ಯಜಿತ್ ಸುರತ್ಕಲ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕುದ್ರೋಳಿ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷೃ ದೇವೇಂದ್ರ ಪೂಜಾರಿ, ಉಪಾಧ್ಯಕ್ಷ ಡಾ.ಬಿ.ಜಿ. ಸುವರ್ಣ, ಸದಸ್ಯರಾದ ಶೈಲೇಂದ್ರ ವೈ. ಸುವರ್ಣ, ಲೀಲಾಕ್ಷ ಕರ್ಕೇರಾ, ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಪದ್ಮನಾಭ ಕೋಟ್ಯಾನ್, ಕಂಕನಾಡಿ ಗರೋಡಿ ಮೊಕ್ತೇಸರ ದಿನೇಶ್ ಅಂಚನ್, ಕಂಕನಾಡಿ ಗರೋಡಿ ಬಿಲ್ಲವ ಸಂಘದ ಅಧ್ಯಕ್ಷ ಭರತೇಶ್, ತುಳುನಾಡ ಬಿರುವೆರ್ ಸಂಘದ ಅಧ್ಯಕ್ಷ ಲೋಕೇಶ್ ಕೋಡಿಕೆರೆ, ಬಿಲ್ಲವ ಬ್ರಿಗೇಡ್ ಸಂಸ್ಥಾಪಕ ಅವಿನಾಶ್, ಯುವವೇದಿಕೆ ಮಾಜಿ ಅಧ್ಯಕ್ಷ ಎಂ.ಎಸ್. ಕೋಟ್ಯಾನ್, ಜಪ್ಪಿನಮೊಗರು ಬಿಲ್ಲವ ಸಂಘದ ಅಧ್ಯಕ್ಷ ನಾಗಾರಾಜ್, ಮುಖಂಡರಾದ ಸಚಿನ್, ಹರಿಪ್ರಸಾದ್, ಕೃಷ್ಣಪ್ಪ ಪೂಜಾರಿ, ಚಂದ್ರಶೇಖರ್ ಉಪಸ್ಥಿತರಿದ್ದರು.
ವರದಿ ಕೃಪೆ :ವಾರ್ತಾಭಾರತಿ

Wednesday, 6 April 2016

BYV-MANGALURU

" ಓಂ  ಶ್ರೀ ನಾರಾಯಣ ಪರಮ ಗುರುವೇ  ನಮಃ "
BYV ಸಂಘಟನೆಯು-
ಸಂಸ್ಕಾರ ,ಸಂಸ್ಕ್ರತಿ ಮತ್ತು ಆಧ್ಯಾತ್ಮ ಪರಿಕಲ್ಪನೆಯೊಂದಿಗೆ ನಮ್ಮ ಸಮಾಜವನ್ನು  ಮುನ್ನಡೆಸುವುದು   ........ ಆಂತಹ ಚಿಂತನೆಯೊಂದಿಗೆ ಹುಟ್ಟಿ ಕೊಂಡಿದೆ ಸಂಘಟನೆ. ನಮ್ಮ ಸಮಾಜದ ಜನತೆಯನು ಆಧ್ಯಾತ್ಮಮಿಕ ಚಿಂತನೆಯೊಂದಿಗೆ  ಸುಸಂಸ್ಕೃತ ಸಮಾಜವನಾಗಿ ರೂಪಿಸುದೆ ನಮ್ಮ. ಮುಖ್ಯ ಉದ್ದೇಶವಾಗಿದೆ.ಇಲ್ಲಿ ನಾವೆಲ್ಲರೂ ಪಕ್ಷ ಬೇಧ ಮರೆತು ನಮ್ಮ ಸಮಾಜದ ಒಳಿತಿಗಾಗಿ ನಾವೆಲ್ಲ ಒಟ್ಟಿಗೆ ಸೇರಿ ಕೆಲಸ ಮಾಡುವ ತಾನೇ .......ಬನ್ನಿ ..ಸುಬ್ರಹ್ಮಣ್ಯನ ರೂಪದಲ್ಲಿ ಅವತಾರ ತಾಳಿದ..ಬ್ರಹ್ಮ  ಶ್ರೀ ನಾರಾಯಣ ಗುರುಗಳ ಸಂದೇಶದಂತೆ ಮನ್ನಡೆಯವ...........
ಎಲ್ಲರಿಗೂ ಒಳಿತಗಲಿ....ಎಲ್ಲರಿಗೊ ಬೆಳಕಗಲಿ .......

....ಎಲ್ಲರಿಗೂ ಶುಭವಾಗಲಿ

ನಿಮ್ಮೊಂದಿಗೆ ,
BYV ಸಂಘಟನೆಯ
ಪರಿಕಲ್ಪನೆಯ ಶಕ್ತಿ ಬ್ರಹ್ಮ ಶ್ರೀ  ನಾರಾಯಣ ಗುರು
--

*"ಬಿಲ್ಲವ  ಯೂಥ್ ವಿಂಗ್ "ಮಂಗಳೂರು ಇಂಡಿಯಾ*
social worker
Post Box No:132
Mangaluru-575001 India
billavayouthving@gmail.com
www.billavayouthving.blogspot.in




ಬಿಲ್ಲವ ಯೂಥ್ ವಿಂಗ್.  ಮಂಗಳೂರು  , ಇಂಡಿಯಾ 
ನಿಮಗೆ ಸಮಾಜದ ಬಡ ಜನರ ಸೇವೆ ಮಾಡಲು  ಆಸಕ್ತಿ ಇದೆಯೇ ?
ನಮ್ಮ  ಸಂಘಟನೆ ರಾಜಕೀಯ ರಹಿತವಾಗಿದೆ.  

ರಾಜಕೀಯ ರಹಿತವಾಗಿರುವ ಸಂಘಟನೆಯಲ್ಲಿ ನೀವು  ಕೆಲಸ ಮಾಡಲು ಇಚ್ಚಿಸುತೀರಾ ?...ಬನ್ನಿ ನಮ್ಮ ಜೊತೆಗೆನಾವೇಲ್ಲರೂ  ಒಟ್ಟು ಸೇರಿ ನಮ್ಮ  ಸಮಾಜದ  ಬಡ  ಜನರ ಸೇವೆ ಮಾಡುವಾ....... ಬನ್ನಿ ....  
ನಮ್ಮನು ಸಂಪರ್ಕಿಸಿ. ........ 
billavayouthving@gmail.com
ಬಿಲ್ಲವ ಯೂಥ್ ವಿಂಗ್.  ಮಂಗಳೂರು  , ಇಂಡಿಯಾ 
ನಿಮಗೆ ಸಮಾಜದ ಬಡ ಜನರ ಸೇವೆ ಮಾಡಲು  ಆಸಕ್ತಿ ಇದೆಯೇ ?
ನಮ್ಮ  ಸಂಘಟನೆ ರಾಜಕೀಯ ರಹಿತವಾಗಿದೆ.  

ರಾಜಕೀಯ ರಹಿತವಾಗಿರುವ ಸಂಘಟನೆಯಲ್ಲಿ ನೀವು  ಕೆಲಸ ಮಾಡಲು ಇಚ್ಚಿಸುತೀರಾ ?...ಬನ್ನಿ ನಮ್ಮ ಜೊತೆಗೆನಾವೇಲ್ಲರೂ  ಒಟ್ಟು ಸೇರಿ ನಮ್ಮ  ಸಮಾಜದ  ಬಡ  ಜನರ ಸೇವೆ ಮಾಡುವಾ....... ಬನ್ನಿ ....  -----------------

ಲಾಗ್ ಆನ್ :http://billavayouthving.blogspot.in ಬಿಲ್ಲವ ಯೂಥ್ ವಿಂಗ್.  ಮಂಗಳೂರು  , ಇಂಡಿಯಾ 
ನಿಮಗೆ ಸಮಾಜದ ಬಡ ಜನರ ಸೇವೆ ಮಾಡಲು  ಆಸಕ್ತಿ ಇದೆಯೇ ?
ನಮ್ಮ  ಸಂಘಟನೆ ರಾಜಕೀಯ ರಹಿತವಾಗಿದೆ.  

ರಾಜಕೀಯ ರಹಿತವಾಗಿರುವ ಸಂಘಟನೆಯಲ್ಲಿ ನೀವು  ಕೆಲಸ ಮಾಡಲು ಇಚ್ಚಿಸುತೀರಾ ?...ಬನ್ನಿ ನಮ್ಮ ಜೊತೆಗೆನಾವೇಲ್ಲರೂ  ಒಟ್ಟು ಸೇರಿ ನಮ್ಮ  ಸಮಾಜದ  ಬಡ  ಜನರ ಸೇವೆ ಮಾಡುವಾ....... ಬನ್ನಿ ....  
ನಮ್ಮನು ಸಂಪರ್ಕಿಸಿ. ........ 
billavayouthving@gmail.com